ಪುಣ್ಯಕೋಟಿಗೆ

ಮುಂದೆ ಬಂದರೆ ಹಾಯಬೇಡ
ಹಿಂದೆ ಬಂದರೆ ಒದೆಯಬೇಡ
ಎಂದು ಕಂಡ ಕಂಡವರಿಗೆಲ್ಲ ಕೈ ಮುಗಿದು
ಕಂಬನಿಯ ಕೆಚ್ಚಲು ಕರೆಯಬೇಡ
ಹುಟ್ಟಿಸಿದ ದೇವರು ಹುಲ್ಲನ್ನ ಮೇಯಿಸುವ
ನನ್ನ ಭವಿಷ್ಯವ ನೀನೇ ಬರೆಯಬೇಡ

ಹೋಗು ನಿನಗಾಗಿ
ಹಾತೊರೆದ ಹುಲಿಯ ಎದುರೇ ನಿಲ್ಲು
ಒಡ್ಡು ಗುಂಡಿಗೆಯ ರಕ್ತ ಬಿಸಿ
ನನ್ನ ಮಗು ತರಳ ಇನ್ನೂ ಹಸಿ
ಕೊಡು ಅವನಿಗೂ ಸಾವು
ಕೂಡಿ ಬರುವೆವು ನಾವು
ನಿನ್ನ ಜೀವಾರಣ್ಯ ರೋದನದ
ಹಂಬಲ ಕಟ್ಟಿದ ಕೊಟ್ಟಿಗೆಯಲ್ಲಿ
ಉಳಿಯಗೊಡು ನನ್ನ
ಕರುವಿನ ಕಿರಿದೊಗಲು ನೆಕ್ಕಿ ಇಗೋ
ಉಣಿಸುತ್ತೇನೆ ಶ್ವಾಸ-ನಾನೇ ಸತ್ತರೂ
ನನ್ನನ್ನೇ ನಿನಗೇ ಇತ್ತರೂ

ಸಾವು ನಿನ್ನನ್ನು ಕರೆಯುವ ಹೊತ್ತು,
ಈ ರೀತಿ ನನ್ನನ್ನೂ ಹೊತ್ತು
ನಡೆ ಕೂಡಿ ಬದುಕೋಣ ಸಾವಿನಲ್ಲೂ
ಮತ್ತು ಹಾಗೆ ಇಲ್ಲೂ

ಹೆಬ್ಬುಲಿಯ ಬಾಯಲ್ಲಿ
ಬಾಯಾರಿ ನಡೆವಾಗ
ನಿನ್ನ ಕರುವಿನ ಕರುಳು ಕೀಳಬೇಡ
ಹೀಗೆ ಮುಂದೂ ಹಾದು
ಹಿಂದಿಂದಲೂ ಒದೆದು
ನನ್ನ ತಬ್ಬಲಿ ‘ಮಾಡಿ’ ಹೋಗಬೇಡ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಂಜದಮ್ಯಾಲ ನಿನ್ನ ಮನಸು
Next post ಕನಸು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys